ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮೇ 30
Posted date: 21 Thu, May 2015 – 10:48:47 PM

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ.ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ ೨೫ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ನೀಡಲು ಮುಂದಾದರು.  ಈಗ ಪ್ರಶಸ್ತಿಗಳ ಸಂಖ್ಯೆ ೧೧ಕ್ಕೇರಿದೆ. ಇಂದು ನಮ್ಮೊಂದಿಗೆ ಪ್ರಸಿದ್ದ ನಟರು, ಪತ್ರಕರ್ತರು ಹಾಗೂ ನಿರ್ದೇಶಕರು ಪ್ರಶಸ್ತಿ ಸಮಾರಂಭಕ್ಕೆ ಜೊತೆಯಾಗಿ ಈ ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸಂಸ್ಥೆಯ ೩೮ನೇ ವಾರ್ಷಿಕೋತ್ಸವ ಹಾಗೂ ೧೪ನೇ ವರ್ಷದ  ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩೦ರ ಶನಿವಾರದಂದು ಸಂಜೆ ೫ಕ್ಕೆ ನಗರದ ಶ್ರೀಚಾಮುಂಡೇಶ್ವರಿ ಸ್ಟುಡಿಯೋ (ಕನ್ನಿಂಗ್ ಹ್ಯಾಮ್ ರಸ್ತೆ, ವೊಕಾರ್ಟ್ ಆಸ್ಪತ್ರೆ ಬಳಿ)ನಲ್ಲಿ ನಡೆಯಲಿದೆ.
ದಯವಿಟ್ಟು ಪ್ರಶಸ್ತಿ ವಿವರಗಳೊಂದಿಗೆ ನೀಡುತ್ತಿರುವ ಈ ಪ್ರಕಟಣೆಯನ್ನು ತಮ್ಮ ಘನ ಮಾಧ್ಯಮದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸುತ್ತೇವೆ.
     
                                        ಪ್ರಶಸ್ತಿಗಳ ವಿವರ
ಶ್ರೀ ಬಿ.ಎನ್.ಗಂಗಾಧರ್ ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಶ್ರೀ ರಾಜನ್(ಮೈಸೂರು) ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಶ್ರೀಮತಿ ಗೀತಾ ಉಪೇಂದ್ರಕುಮಾರ್ ಖ್ಯಾತ ಹಿನ್ನಲೆಗಾಯಕರು
(‘ಡಾ:ರಾಜ್‌ಕುಮಾರ್ ಪ್ರಶಸ್ತಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ)

ಶ್ರೀತಿಪಟೂರು ರಘು ನಿರ್ದೇಶಕರು
(‘ಯಜಮಾನ ಚಿತ್ರದ ಖ್ಯಾತಿ ‘ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ)

ಶ್ರೀಮತಿ ಶೈಲಶ್ರೀ ಕಲಾವಿದರು
(ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)

ಶ್ರೀ ಅಜನೀಶ್‌ಲೋಕನಾಥ್ ಅತ್ಯತ್ತಮ ಸಂಗೀತ ನಿರ್ದೇಶನ ‘ಉಳಿದವರು ಕಂಡಂತೆಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ.ಲಿ ಪ್ರಶಸ್ತಿ)

ಶ್ರೀ ಚಂದ್ರಕಾಂತ್ ಅತ್ಯುತ್ತಮ ಕಥಾಲೇಖಕರು ‘೧೪೩ ಚಿತ್ರ
      (‘ಖ್ಯಾತ ನಿರ್ದೇಶಕ, ನಿರ್ಮಾಪಕ ಶ್ರೀಕೆ.ವಿ.ಜಯರಾಂ ಪ್ರಶಸ್ತಿ ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ)

ಶ್ರೀ ನವೀನ್‌ಕೃಷ್ಣ ಅತ್ಯುತ್ತಮ ಸಂಭಾಷಣೆ ‘ಹಗ್ಗದ ಕೊನೆ ಚಿತ್ರಕ್ಕಾಗಿ
(‘ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಡಾ:ಎಚ್.ಕೆ.ನರಹರಿ ಅವರಿಂದ)

ಶ್ರೀ ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಜ಼್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಶ್ರೀಬಿ.ಸುರೇಶ್ ಪ್ರಶಸ್ತಿ)

ಶ್ರೀಜಯಂತ ಕಾಯ್ಕಿಣಿ  ‘ಒಗ್ಗರಣೆ(ಈ ಜನುಮವೇ) ಚಿತ್ರದ ಗೀತರಚನೆಗಾಗಿ
(‘ಹಿರಿಯ ಪತ್ರಕರ್ತರಾದ ಶ್ರೀಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )

ಶ್ರೀ ಸುದರ್ಶನ್ ಹಿರಿಯ ಕಲಾವಿದರು
(‘ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ ನಟ ಶ್ರೀ ಸುದೀಪ್ ಅವರಿಂದ)


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed